`ಧೈರ್ಯಂ` ಆರಂಭ
Posted date: 19 Fri, Aug 2016 – 09:53:18 AM

ರಾಜ್ ಪ್ರೊಡಕ್ಷನ್ ಲಾಂಛನದಲ್ಲಿ ಡಾ||ಕೆ.ರಾಜು ಅವರು ನಿರ್ಮಿಸುತ್ತಿರುವ ‘ಧೈರ್ಯಂ’ ಚಿತ್ರದ ಮುಹೂರ್ತ ಸಮಾರಂಭ ವರಮಹಾಲಕ್ಷ್ಮೀ ಹಬ್ಬದ ಶುಭದಿನದಂದು ಮೋದಿ ಆಸ್ಪತ್ರೆ ಬಳಿಯ ವಿನಾಯಕ ದೇವಸ್ಥಾನದಲ್ಲಿ ನಡೆಯಿತು. ಚಿತ್ರದ ಪ್ರಥಮ ಸನ್ನಿವೇಶಕ್ಕೆ ಖ್ಯಾತ ನಿರ್ದೇಶಕ ಆರ್.ಚಂದ್ರು ಆರಂಭ ಫಲಕ ತೋರಿದರು. ಡಾ||ನರೇಂದ್ರ ರಂಗಪ್ಪ ಕ್ಯಾಮೆರಾ ಚಾಲನೆ ಮಾಡಿದರು.  ಚಿತ್ರಕ್ಕೆ ಈ ತಿಂಗಳ ೧೮ರಿಂದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ.
     ಅಜಯ್ ರಾವ್ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರವನ್ನು ಶಿವ ತೇಜಸ್ ನಿರ್ದೇಶಿಸುತ್ತಿದ್ದಾರೆ. ಹಿಂದೆ ‘ಮಳೆ‘ ಚಿತ್ರವನ್ನು ನಿರ್ದೇಶಿಸಿದ್ದ ಅನುಭವ ಶಿವತೇಜಸ್ ಅವರಿಗಿದೆ. ಎಮಿಲ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಹರ್ಷ, ಕಲೈ, ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಾಧುಕೋಕಿಲ, ಹೊನ್ನವಳ್ಳಿ ಕೃಷ್ಣ, ಸಂಗೀತ, ಶ್ರೀನಿವಾಸಪ್ರಭು, ಎಸ್ಖಾರ್ಟ್ ಶ್ರೀನಿವಾಸ್, ಸಿದ್ದಾರಾಜ್ ಕಲ್ಯಾಣ್‌ಕರ್, ವಿಜಯಲಕ್ಷ್ಮೀ ಉಪಾಧ್ಯಾಯ, ಚಿತ್ಕಲಾ, ಸಿಂಗರ್ ಶ್ರೀನಿವಾಸ್, ಸೋನು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
    ನಾಯಕಿಯ ಆಯ್ಕೆ ನಡೆಯುತ್ತಿದ್ದು, ಖಳನಟನ ಪಾತ್ರ ನಿರ್ಹಹಣೆಗೆ ಬಾಲಿವುಡ್‌ನ ಹೆಸರಾಂತ  ಖಳನಟರ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed